ಬಬ್ರುವಾಹನ ನಾಳೆಯಿಂದ ತೆರೆಗೆ
Posted date: 21 Thu, Apr 2016 – 12:49:24 PM
1977ರಲ್ಲಿ ರಾಜ್ ಕಮಲ್ ಆರ್ಟ್ಸ್ (ದೊಡ್ಡಬಳ್ಳಾಪುರ) ಲಾಂಛನದಡಿಯಲ್ಲಿ ಹೆಸರಾಂತ ನಿರ್ಮಾಪಕ ಕೆ.ಸಿ.ಎನ್. ಗೌಡರು ನಿರ್ಮಿಸಿದ ಯಶಸ್ವೀ ರಜತೋತ್ಸವ ವಾರವನ್ನಾಚರಿಸಿದ ಪೌರಾಣಿಕ ಚಿತ್ರ ಬಬ್ರುವಾಹನ ಈಗ ನೂತನ ತಂತ್ರಜ್ಞಾನದಲ್ಲಿ ಇದೇ 22ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ.
ಡಾ|| ರಾಜ್ಕುಮಾರ್ (ದ್ವಿಪಾತ್ರ) ದೊಂದಿಗೆ ಬಿ. ಸರೋಜದೇವಿ, ಕಾಂಚನ, ಜಯಮಾಲ, ವಜ್ರಮುನಿ, ರಾಜಾನಂದ್, ರಾಮಕೃಷ್ಣ ಮುಂತಾದವರ ಅದ್ದೂರಿ ತಾರಾ ಬಳಗವನ್ನು ಈ ಚಿತ್ರದಲ್ಲಿದೆ.
DIZIPEP ಮಿಕ್ಸ್ ನೊಂದಿಗೆ ನೂತನ ತಂತ್ರಜ್ಞಾನಕ್ಕೆ ಅಡಳವಡಿಸಿದ್ದಾರೆ ತೆರೆಕಾಣುತ್ತಿರುವ ಈ ಚಿತ್ರವನ್ನು ಹುಣಸೂರು ಕೃಷ್ಣಮೂರ್ತಿ ಸಂಭಾಷಣೆ, ಚಿತ್ರಕಥೆ ಬರೆದು ನಿರ್ದೇಶಿಸಿದ್ದು, ಚಿ. ಉದಯಶಂಕರ್ ಸಾಹಿತ್ಯ, ಟಿ.ಜಿ. ಲಿಂಗಪ್ಪ ಸಂಗೀತ, ಶ್ರೀಕಾಂತ್ ಛಾಯಾಗ್ರಹಣ, ಭಕ್ತವತ್ಸಲಂ ಸಂಕಲನ, ವೈ. ಶಿವಯ್ಯರ ಸಾಹಸವಿದೆ.